ಸುರಪುರ. ತಾಲೂಕಿನ ತಹಸಿಲ್ ಕಾರ್ಯಾಲಯದಲ್ಲಿ ಮಾನ್ಯ ಶ್ರೀ ಸುಬ್ಬಣ್ಣ ಜಮಖಂಡಿ ತಹಶಿಲ್ದಾರರ ನೇತೃತ್ವದಲ್ಲಿ ಜರುಗಿದ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯ ವೇದಿಕೆಯಲ್ಲಿ ಶ್ರೀಮತಿ ಸೋಫಿಯಾ ಸುಲ್ತಾನ್ ಉಪತಹಸೀಲ್ದಾರರು, ಮಹಾದೇವ ರೆಡ್ಡಿ ಶಿಕ್ಷಣ ಇಲಾಖೆ ಅಧಿಕಾರಿಗಳು, ಸುನಿಲ್ ಮೂಲಿಮನಿ ಸರ್ಕಲ್ ಇನಸ್ಪೆಕ್ಟರ್, ಸತ್ಯನಾರಾಯಣ ದರ್ಬಾರಿ ಸಮಾಜ ಕಲ್ಯಾಣ ಅಧಿಕಾರಿಗಳು, ಮೌಲಾಲಿ ಸಾಬ್ ಅರಣ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು. ಈ ಸಂದರ್ಭದಲ್ಲಿ ಮಾನ್ಯ ಶ್ರೀ ಸುಬ್ಬಣ್ಣ ತಹಸಿಲ್ದಾರರು ವಾಲ್ಮೀಕಿ ಸಮುದಾಯದ ಮುಖಂಡರ ಜೊತೆ ವಾಲ್ಮೀಕಿ ಜಯಂತಿಯ ಕುರಿತು ಅನೇಕ ವಿಷಯಗಳನ್ನು ಚರ್ಚೆ ಮಾಡಿದರು. ಈ ಸಭೆಯಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಪದಾಧಿಕಾರಿಗಳಾದ ಶ್ರೀ ರಾಜ ಕೃಷ್ಣಪ್ಪ ನಾಯಕರು ಸುರಪುರ ಸಂಸ್ಥಾನ ಗೌರವಾಧ್ಯಕ್ಷರು, ರವಿಚಂದ್ರ ದರ್ಬಾರಿ ಅಧ್ಯಕ್ಷರು, ರವಿಗೌಡ ಲಕ್ಷ್ಮಿ ಹೆಮನೂರ, ಶ್ರವಣಕುಮಾರ ಡೊಣ್ಣಿಗೇರಿ, ಮಾನಪ್ಪ ಪ್ಯಾಪ್ಲಿ ಉಪಾಧ್ಯಕ್ಷರು, ಮಲ್ಲು ಕಬಾಡಗೆರ ಕಾರ್ಯಾಧ್ಯಕ್ಷರು, ಹಣಮಂತ್ರಾಯ ಮೇಟಿ ಗೌಡ ಪ್ರಧಾನ ಕಾರ್ಯದರ್ಶಿ, ಶರಣು ನಾಯಕ್ ದೇವರಗೋನಾಲ ಸಹ ಕಾರ್ಯದರ್ಶಿ, ಪ್ರಭುಗೌಡ ಸಿದ್ದಾಪುರ ಸಂಘಟನಾ ಕಾರ್ಯದರ್ಶಿ, ದುರ್ಗಪ್ಪ ಡೊಣ್ಣೆಗೆರೆ, ಶ್ರೀನಿವಾಸ್ ಭೈರಮಡ್ಡಿ, ಸಿದ್ದು ಕುಂಬಾರಪೇಟೆ ಸಂಘಟನಾ ಸಹ ಕಾರ್ಯದರ್ಶಿಗಳು,
ಲಕ್ಷ್ಮಣ ಪ್ಯಾಪ್ಲಿ ಖಜಾಂಚಿ, ದೇವೇಂದ್ರ ದೇವರಗೋನಾಲ ಸಹ ಖಜಾಂಚಿ, ವಿನಾಯಕ್ ದೊಡ್ಡಮನಿ, ಮಂಜುನಾಥ್ ಇನಾಮದಾರ್ ಕಾನೂನು ಸಲಹೆಗಾರರು, ನಾಗರಾಜ್ ಪ್ಯಾಪ್ಲಿ ಸಾಮಾಜಿಕ ಜಾಲತಾಣ ಪ್ರಚಾರಕರು ಸೇರಿದಂತೆ ಸಮಾಜದ ಹಿರಿಯ ಮುಖಂಡರಾದ ರಾಜ ಪಿಡ್ಡನಾಯಕ ಸುರಪುರ, ಉಪೇಂದ್ರ ನಾಯಕ್ ಸುಬೇದಾರ್, ದಶರಥ ದೊರೆ ಕಚಕ್ನೂರ್, ಶಂಕರಗೌಡ ಪಾಟೀಲ್, ಕನಕಾಚಲ ನಾಯಕ, ತಮಣ್ಣ ಸಾಬ ವಕೀಲರು, ದೇವೇಂದ್ರಪ್ಪ ಬೇವಿನಕಟ್ಟೆ ವಕೀಲರು, ಇನ್ನೂ ವಾಲ್ಮೀಕಿ ಸಮಾಜದ ಬಂಧುಗಳು ಇತರರು ಭಾಗಿಯಾಗಿದ್ದರು. ವರದಿ- ಸಿಂಧೂರ ಪಾಟೀಲ್ ಸುರಪುರ ತಾಲೂಕ್.