ಬೆಂಗಳೂರು: ಕೊರೊನಾ ತಡೆಗಟ್ಟಲು ಬಿಬಿಎಂಪಿ ಸೂಚಿಸುವ ಪಾಲನೆ ಮಾಡಲು ನಾವು ಸಿದ್ದರಿದ್ದೇವೆ ಎಂದು ಬಾರ್ ಮಾಲೀಕರು ಘೋಷಿಸಿದ್ದಾರೆ.
ಕೊರೊನಾ ತಡೆಗಟ್ಟುವ ಕುರಿತಂತೆ ನಿನ್ನೆ ಪಾಲಿಕೆಯಿಂದ ಸಭೆ ನಡೆಸಿ ಕೆಲವು ಕಟ್ಟುನಿಟ್ಟಿನ ಸೂಚನೆ ಪಾಲಿಸುವಂತೆ ಸಲಹೆ ನೀಡಿದ್ದಾರೆ. ಅವರು ನೀಡಿರುವ ಸೂಚನೆ ಪಾಲಿಸಲು ನಾವು ಸಿದ್ಧರಿದ್ದೇವೆ ಎಂದು ಬಾರ್ ಮಾಲೀಕರ ಸಂಘದ ಅಧ್ಯಕ್ಷ ಶ್ರೀಕಾಂತ್ ನಾಯ್ಡು ತಿಳಿಸಿದ್ದಾರೆ.
ಈಗಾಗಲೇ ನಾವು ಹೊಸ ವರ್ಷ ಆಚರಣೆಗೆ ಸಿದ್ದ ಮಾಡಿಕೊಂಡಿದ್ದೇವೆ. ಇಂತಹ ಸಂದರ್ಭದಲ್ಲಿ ಕಠಿಣ ನಿಯಮಗಳನ್ನು ವಿಧಿಸುವುದು ಬೇಡ ಎಂದು ನಾಯ್ಡು ಮನವಿ ಮಾಡಿಕೊಂಡಿದ್ದಾರೆ.
ಕೊರೊನಾ ನಿಯಮ ಪಾಲಿಸುವಂತೆ ನಾವು ನಮ್ಮ ಗ್ರಾಹಕರು ಹಾಗೂ ಕೆಲಸಗಾರರಿಗೆ ಸೂಚನೆ ನೀಡಿದ್ದೇವೆ. ಸದ್ಯ ಹೊಟೇಲ್ ಬುಕ್ಕಿಂಗ್ ಆಶಾದಾಯಕವಾಗಿತ್ತು. ಈಗ ಜನರು ಬುಕ್ಕಿಂಗ್ ವಾಪಸ್ ಪಡೆಯುವ ಸಾಧ್ಯತೆ ಇದೆ, ಹೀಗಾಗಿ ಸರ್ಕಾರ ಸಮಯ ನಿಗದಿ ಮಾಡದೆ ಇದ್ರೆ ಅನುಕೂಲವಾಗಲಿದೆ ಎಂದರು.