ಕಾಂಗ್ರೆಸ್ ‌ಮುಖಂಡ ಹಾಗೂ ಕೆಪಿಸಿಸಿ ಕಾರ್ಮಿಕ ಘಟಕ(INTUC) ಅಧ್ಯಕ್ಷ ನಿಧನ

ಬೆಂಗಳೂರು: ಕಾಂಗ್ರೆಸ್ ‌ಮುಖಂಡ ಹಾಗೂ ಕೆಪಿಸಿಸಿ ಕಾರ್ಮಿಕ ಘಟಕ ಅಧ್ಯಕ್ಷ ಎಸ್.ಎಸ್.ಪ್ರಕಾಶಂ(70)  ಹೃದಯಾಘಾತದಿಂದ ನಿಧನರಾಗಿದ್ದಾರೆ.

ಎಸ್.ಎಸ್.ಪ್ರಕಾಶಂ ಐಎನ್ಟಿಯುಸಿ ಅಧ್ಯಕ್ಷರಾಗಿದ್ದರು. ಜೊತೆಗೆ ರಾಜೀವ್ ಸದ್ಭಾವನಾ ಯಾತ್ರೆಯ ರೂವಾರಿಯೂ ಆಗಿದ್ದರು. ಮೂರು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದರು. ಆದರೆ, ತೀವ್ರ ಹೃದಯಾಘಾತದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕುರಿತು ರಾಜ್ಯ ಕಾಂಗ್ರೆಸ್ ಟ್ವೀಟ್ಮಾಡಿದೆ. ಕೆಪಿಸಿಸಿಯ ಐಎನ್ಟಿಯುಸಿ ವಿಭಾಗದ ಅಧ್ಯಕ್ಷರಾದ ಶ್ರೀ ಎಸ್.ಎಸ್ ಪ್ರಕಾಶಂ ಅವರ ನಿಧನದಿಂದ ಕಾಂಗ್ರೆಸ್ ಪಕ್ಷ ಅತ್ಯುತ್ತಮ ಸಂಘಟನಾಕಾರರನ್ನು ಕಳೆದುಕೊಂಡು ಬಡವಾಗಿದೆ. ಪಕ್ಷಕ್ಕೆ ಅವರು ಸಲ್ಲಿಸಿದ್ದ ಸೇವೆ ಅಪರಿಮಿತವಾದುದು. ಅವರ ಆತ್ಮಕ್ಕೆ ಶಾಂತಿ ಕೋರುತ್ತೇವೆ, ಕುಟುಂಬಸ್ಥರಿಗೆ ಅಗಲಿಕೆ ಸಹಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುತ್ತೇವೆ ತಿಳಿಸಿದೆ.

 

Discover more from Valmiki Mithra

Subscribe now to keep reading and get access to the full archive.

Continue reading