ಮಹಾರಾಷ್ಟ್ರದಲ್ಲಿ ಹಿಂದುತ್ವ ಮತ್ತು ರಾಷ್ಟ್ರೀಯ ಏಕೀಕರಣ ಕುರಿತು ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ಭಾಗವತ್ ಅವರು, ಹಿಂದುತ್ವವು ಸಂವಿಧಾನ ಪೀಠಿಕೆಯ ಪ್ರತಿಬಿಂಬವಾಗಿದೆ. ಸಮಾನತೆ, ಬ್ರಾತೃತ್ವ, ಸಾಮಾಜಿಕ ನ್ಯಾಯ ಮತ್ತು ಏಕತೆ, ವೈವಿಧ್ಯತೆಗಳ ಮೂಲಕ ಸಾಗುತ್ತಿದೆ ಎಂದು ತಿಳಿಸಿದ್ದಾರೆ.
ದೇಶದ ಎಲ್ಲರೂ ಭಾರತ ಮಾತೆಯ ಸಂತತಿಯಾಗಿದ್ದು, ವಂದೇ ಮಾತರಂ ಗೀತೆ ಎಲ್ಲರನ್ನು ಒಂದುಗೂಡಿಸುತ್ತದೆ. ನಾವೆಲ್ಲರೂ ಒಗ್ಗಟ್ಟಿನಿಂದ ನಡೆಯಬೇಕು. ಹಿಂದುತ್ವವೇ ನಮ್ಮೆಲ್ಲರನ್ನು ಜೋಡಿಸುತ್ತದೆ. ವಿವಿಧತೆಯಲ್ಲಿ ಏಕತೆಯನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.
ವಿವಿಧತೆಯಲ್ಲಿ ಏಕತೆಯ ಪರಿಕಲ್ಪನೆ, ಪ್ರಾಚೀನ ಕಾಲದಿಂದಲೂ ಭಾರತೀಯ ಸಂಸ್ಕøತಿಯ ಮಾರ್ಗವಾಗಿದೆ ಮತ್ತು ಭಾರತೀಯ ಸಾಂಸ್ಕøತಿಕ ಗುರುತನ್ನು ಹಿಂದುತ್ವದಿಂದಲೇ ವ್ಯಾಖ್ಯಾನಿಸಲಾಗಿದೆ. ಹಿಂದು ಎಂಬುದು ಸಂಸ್ಕøತಿಯ ಹೆಸರಾಗಿದೆ. ಹೆಚ್ಚಾಗಿ ದೇಶದ ಜನರ ಜೀವನ ಶೈಲಿಯಾಗಿದೆ ಎಂದು ಅಭಿಪ್ರಾಯಪಟ್ಟರು.