ಬೆಂಗಳೂರು: ಶಿವರಾಜ್ ಕುಮಾರ್ ಕಂಡು ಖುಷಿಯಿಂದಲೇ ಕೂಗಾಡಿ ಬಿಡ್ತಾರೆ. ವೇದ ಸಿನಿಮಾ ಚೆನ್ನಾಗಿಯೇ ಹೋಗುತ್ತಿದೆ.ವೇದ ಸಿನಿಮಾದಲ್ಲಿ ಹೆಣ್ಣುಮಕ್ಕಳ ಹೋರಾಟದ ಹಾದಿ ಇದೆ. ಅನ್ಯಾಯ ಸಹಿಸೋದು ಬೇಡ, ಅದರ ವಿರುದ್ಧ ಹೋರಾಟ ಮಾಡೋದರ ಬಗ್ಗೆ ಈ ಚಿತ್ರದಲ್ಲಿ ಅದ್ಭುತವಾಗಿ ತೋರಿಸಲಾಗಿದೆ.
ವೇದ ಸಿನಿಮಾ ನಿಜಕ್ಕೂ ಗಂಡಸರಿಗೆ ಎಚ್ಚರಿಕೆ ಘಂಟೆಯಾಗಿದೆ. ಮಹಿಳೆಯರಿಗೆ ಕಾನ್ಫಿಡೆನ್ಸ್ ತುಂಬುವ ಕೆಲಸ ಕೂಡ ಮಾಡಿದೆ. ಚಿತ್ರವನ್ನ ನೋಡಿದ ಪ್ರೇಕ್ಷಕರಿಗೆ ಒಂದು ಧನ್ಯವಾದ ಹೇಳಬೇಕು ಎಂದು ಸಿನಿಮಾ ಟೀಮ್ ಹೇಳಿದೆ.
ಶಿವರಾಜ್ ಕುಮಾರ್ ತಮ್ಮ ಅಭಿಮಾನಿಗಳ ಜೊತೆಗೆ ಆರಾಮಾಗಿ ಇರುತ್ತಾರೆ.ಶಿವರಾಜ್ ಕುಮಾರ್ ಸದ್ಯ ಥಿಯೇಟರ್ ವಿಸಿಟ್ ಮಾಡುತ್ತಿದ್ದಾರೆ.ಇದೆ ರೀತಿ ಶಿವಣ್ಣ ನೋಡಿದ ಅಭಿಮಾನಿಗಳ ಖುಷಿಗೆ ಪರವೇ ಇರಲಿಲ್ಲ..ಮೊದಲು ಮಾತನಾಡಲು ಬಿಡ್ರೋ. ಹೀಗೆ ಕಿರುಚಾಡಿದ್ರೆ ಹೇಗೆ, ನಾವು ಯಾಕೆ ಬಂದಿದ್ದೇವೆ ಅನ್ನೋದೆ ನಿಮಗೆ ಗೊತ್ತಾಗೋದಿಲ್ಲ ಎಂದು ಅಭಿಮಾನಿಗಳಿಗೆ ಶಿವಣ್ಣ ಪ್ರೀತಿಯಿಂದ ಹೇಳಿದ್ದಾರೆ.