colornews
domain was triggered too early. This is usually an indicator for some code in the plugin or theme running too early. Translations should be loaded at the init
action or later. Please see Debugging in WordPress for more information. (This message was added in version 6.7.0.) in /home/jegprscn/public_html/wp-includes/functions.php on line 6121The post ಬೆಂಗಳೂರಿನ ನಗರ ಪ್ರದೇಶಗಳ ಸ್ಕೂಲ್ಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ..! appeared first on Valmiki Mithra.
]]>ರಾಜ್ಯದ 13 ಸಾವಿರ ಸ್ಕೂಲ್ಗಳಿಗೆ ಮಾಸ್ಕ್ ಕಡ್ಡಾಯ ಮಾಡೋದಾಗಿ ಸ್ಕೂಲ್ ಅಸೋಷಿಯೇಷನ್ ಚಿಂತನೆ ನೆಡೆಸಿದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು ವಿವಿಯಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದ್ದು, ವಿದ್ಯಾರ್ಥಿಗಳಿಗೆ ಬೂಸ್ಟರ್ ಡೋಸ್ ಹಾಕಿಸಿಕೊಳ್ಳುವಂತೆ ಒತ್ತಾಯಿಸಲಾಗಿದೆ. ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ಮಾಸ್ಕ್ ಧರಿಸಿ ಜಾಗೃತಿ ಮೂಡಿಸಿದ್ದಾರೆ.ಇನ್ನು ಶಾಲೆಯಲ್ಲಿ ಮಕ್ಕಳಿಗೂ ಮಾಸ್ಕ್ ಕಡ್ಡಾಯ ಮಾಡೋದಾಗಿ ಅಸೋಸಿಯೇಷನ್ ತಿಳಿಸಿದು, ಈ ಮಾಹಿತಿ ಅಧಿಕೃತವಾಗಿ ಇನ್ನು ಹೊರ ಬರಬೇಕಿದೆ..
The post ಬೆಂಗಳೂರಿನ ನಗರ ಪ್ರದೇಶಗಳ ಸ್ಕೂಲ್ಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ..! appeared first on Valmiki Mithra.
]]>The post ರಾಜಕೀಯ ಜೀವನದಲ್ಲಿ ರೌಡಿ ಸಹವಾಸ ಮಾಡಿಲ್ಲ. ಅವರು ರೌಡಿಗಳ ಸಹಕಾರದಿಂದ ಚುನಾವಣೆ ಗೆದ್ದಿರುವ ಇತಿಹಾಸವೂ ಇಲ್ಲ appeared first on Valmiki Mithra.
]]>ಸೋಮಣ್ಣ ಅವರು ಬಸವ ತತ್ವ ನಂಬಿದವರು. ಅವರ ಮೇಲೆ ಈ ಆಪಾದನೆ ಸರಿಯಲ್ಲ. ಯಾರಾದರೂ ಬಂದಿರಬಹುದು, ಆದರೆ ಅದನ್ನು ದೊಡ್ಡ ವಿಚಾರ ಮಾಡುವುದು ಸರಿಯಲ್ಲ. ರಾಜಕಾರಣಿಗಳು ಇಂತಹಾ ವ್ಯಕ್ತಿಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದಲ್ಲ ಎಂದರು.
ಕಾಂಗ್ರೆಸ್ ದೇಶದಲ್ಲಿ 50 ವರ್ಷ ಆಡಳಿತ ಮಾಡಿದೆ. ರೌಡಿಗಳಿಗೆ ಬೆಳೆಯಲು ಅವಕಾಶ ಕೊಟ್ಟಿದ್ದು ಕಾಂಗ್ರೆಸ್. ಕಾಂಗ್ರೆಸ್ ಒಂದು ರೀತಿಯಲ್ಲಿ ರೌಡಿಗಳನ್ನು ತಯಾರಿ ಮಾಡುವ ಕಾರ್ಖಾನೆ. ಬೇಕಾದಷ್ಟು ರೌಡಿ ಗಳ ಬೆಂಬಲದಿಂದ ಅಧಿಕಾರ ನಡೆಸಿದ್ದಾರೆ.ಹಿಂದೆ ಡಾನ್ ಗಳ ರಾಜ್ಯ ಇತ್ತು. ಇವಾಗ ಅವರೆಲ್ಲಾ ಮೂಲೆ ಸೇರಿದ್ದಾರೆ ಎಂದು ತಿರುಗೇಟು ನೀಡಿದರು.
The post ರಾಜಕೀಯ ಜೀವನದಲ್ಲಿ ರೌಡಿ ಸಹವಾಸ ಮಾಡಿಲ್ಲ. ಅವರು ರೌಡಿಗಳ ಸಹಕಾರದಿಂದ ಚುನಾವಣೆ ಗೆದ್ದಿರುವ ಇತಿಹಾಸವೂ ಇಲ್ಲ appeared first on Valmiki Mithra.
]]>The post ಬಿ.ಎಂ.ಆರ್.ಸಿ.ಎಲ್. (ನಮ್ಮ ಮೆಟ್ರೋ) ಇನ್ನು ಸುಲಭ…!!!! appeared first on Valmiki Mithra.
]]>ಮೆಟ್ರೋ ಅಪ್ಲಿಕೇಷನ್, ಪೇಟಿಎಂ ಮತ್ತು ಯಾತ್ರಾ ಅಪ್ಲಿಕೇಷನ್ನಲ್ಲಿ ಹಣ ಪಾವತಿಸಿ, ಕ್ಯೂಆರ್ ಕೋಡ್ ಡೌನ್ಲೋಡ್ ಮಾಡಬೇಕು. ಮೆಟ್ರೋ ಗೇಟ್ನಲ್ಲಿರುವ ಕ್ಯೂಆರ್ ಸ್ಕಾಯನರ್ಗೆ ಡೌನ್ಲೋಡ್ ಮಾಡಿರುವ ಕ್ಯೂಆರ್ ಕೋಡ್ ತೋರಿಸಿ ಸರಾಗವಾಗಿ ಮೆಟ್ರೋ ನಿಲ್ದಾಣದೊಳಗೆ ಪ್ರವೇಶಿಸಬಹುದು.
ಕೆಲ ದಿನಗಳಲ್ಲಿ ವ್ಯವಸ್ಥೆಯ ಪರೀಕ್ಷೆ ನಡೆಯಲಿದೆ. ಎಲ್ಲವೂ ಸುಸೂತ್ರವಾಗಿ ಸಾಗಿದರೆ ಸೆಪ್ಟೆಂಬರ್ ಅಂತ್ಯಕ್ಕೆ ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.
The post ಬಿ.ಎಂ.ಆರ್.ಸಿ.ಎಲ್. (ನಮ್ಮ ಮೆಟ್ರೋ) ಇನ್ನು ಸುಲಭ…!!!! appeared first on Valmiki Mithra.
]]>The post ಜೀವನ ಕಷ್ಟ ಅನ್ನೋರು ಈ ಸ್ಟೋರಿ ಓದಿ …!!!!! appeared first on Valmiki Mithra.
]]>ಇವರ ಕತೆಯನ್ನು ಬೆಂಗಳೂರಿನಲ್ಲಿ ಉದ್ಯೋಗಿ ಆಗಿರುವ ಲಿಂಕ್ಡಿನ್ ಬಳಕೆದಾರ ರೋಹಿತ್ ಕುಮಾರ್ ಸಿಂಗ್ ಅವರು ಬರೆದುಕೊಂಡಿದ್ದಾರೆ. ಕೃಷ್ಣಪ್ಪ ಅವರ ಕತೆ ವ್ಯಥೆ ಈಗ ವೈರಲ್ ಆಗಿದ್ದು, ಜನ ಅವರಿಗೆ ಸಹಾಯಹಸ್ತ ಚಾಚಲು ಮುಂದೆ ಬಂದಿದ್ದಾರೆ. ರೋಹಿತ್ ಅವರ ಬರಹದ ಸಾರಾಂಶ ಇಲ್ಲಿದೆ. ಸೋಮವಾರ ರೋಹಿತ್ ಅವರು ಹಂಚಿಕೊಂಡ ಪೋಸ್ಟ್ ಇದಾಗಿದೆ. ನಿನ್ನೆ ಬೆಂಗಳೂರಿನಲ್ಲಿ ಒಂದು ಸುಂದರವಾದ ಭಾನುವಾರವಾಗಿತ್ತು, ಕತ್ತಲು ಕತ್ತಲಾದ ವಾತಾವರಣ, ಲಘುವಾದ ತುಂತುರು ಮತ್ತು ಸೂರ್ಯನ ಬೆಳಕು ಭಾನುವಾರವನ್ನು ಮತ್ತಷ್ಟು ಸುಂದರವಾಗಿಸಿತ್ತು. ಭಾನುವಾರದಂದು ಹೆಚ್ಚಿನ ಬೆಂಗಳೂರಿಗರಂತೆ ನಾನು ಕೂಡ ನನ್ನ ಆರಾಮದಾಯಕವಾದ ಹಾಸಿಗೆಯಿಂದ ಹೊರಬರಲು ಸೋಮಾರಿಯಾಗಿದ್ದೆ ಮತ್ತು ಹೀಗಾಗಿ ಆನ್ಲೈನ್ ಮೂಲಕ ಆಹಾರ ಆರ್ಡರ್ ಮಾಡಲು ನಿರ್ಧರಿಸಿದೆ. ಈ ಜೀವನ ಎಷ್ಟು ಸುಂದರ ಎಂದು ನನಗೆ ಅನಿಸಿತು.
ನ್ಲೈನ್ನಲ್ಲಿ ಆಹಾರ ಆರ್ಡರ್ ಮಾಡಿದ ನನಗೆ ಆಹಾರ ಆಗಮನಕ್ಕೆ 30 ನಿಮಿಷ ತೋರಿಸುತ್ತಿತ್ತು. ಹಸಿವು ಜೋರಾಗಿದ್ದರಿಂದ ನನ್ನ ತಾಳ್ಮೆಯೂ ಕೆಡಲು ಶುರುವಾಗಿತ್ತು. ಆದರೆ ಸ್ವಲ್ಪ ಸಮುಯದಲ್ಲೇ 30 ನಿಮಿಷಗಳು ಕಳೆದವು. ಆದರೆ ಡೆಲಿವರಿ ಬಾಯ್ ಇನ್ನು ಬಂದಿದರಲಿಲ್ಲ. ಡೆಲಿವರಿ ಬಾಯ್ಗೆ ಕರೆ ಮಾಡಿದಾಗ ಆತ ತುಂಬಾ ಸಮಾಧಾನದ ಸ್ವರದಿಂದ ನಾನು ಸ್ವಲ್ಪ ಸಮಯದಲ್ಲೇ ಅಲ್ಲಿರುತ್ತೇನೆ ಸರ್ ಎಂದ. ಮತ್ತಷ್ಟು ನಿಮಿಷಗಳು ಕಳೆದವು. ನಾನು ಮತ್ತೆ ಆತನಿಗೆ ಕರೆ ಮಾಡಿದೆ, (‘ಭಯ್ಯಾ ಪ್ಲೀಸ್ ಜಲ್ದಿ ಕರೋ ನಾ, ಭೂಖ್ ಲಗ್ ರಹ ಹೈ) ಸಹೋದರ ದಯವಿಟ್ಟು ಬೇಗ ಬಾ ನನಗೆ ಬಹಳ ಹಸಿವಾಗುತ್ತಿದೆ ಎಂದು ಹೇಳಿದೆ.
ಅವರು ಮತ್ತೊಮ್ಮೆ ಅದೇ ಶಾಂತ ಚಿತ್ತದಿಂದ ಪ್ರತಿಕ್ರಿಯಿಸಿದರು ಮತ್ತು ನನಗೆ ಕೇವಲ 5 ನಿಮಿಷಗಳಲ್ಲಿ ತಲುಪುವೆ ಎಂದರು. ಮುಂದಿನ 5-10 ನಿಮಿಷಗಳಲ್ಲಿ,ಕರೆಗಂಟೆ ಬಾರಿಸಿತು. ನಾನು ವಿಳಂಬವಾಗಿ ಬಂದಿರುವುದಕ್ಕೆ ತಾಳ್ಮೆಗೆಟ್ಟು ಅವರಿಗೆ ವಿಳಂಬದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಬೇಕು ಎಂದು ಬಿರ ಬಿರನೇ ನಡೆದು ಬಾಗಿಲು ತೆಗೆದು ನೋಡಿದಾಗ ನನಗೆ ಆಘಾತ ಕಾದಿತ್ತು. ಡೆಲಿವರಿ ಬಾಯ್ ಒಬ್ಬರು ವಿಶೇಷಚೇತನರಾಗಿದ್ದರು. ಬೈಯ್ಯಲು ಯೋಚಿಸಿದ್ದ ನಾನು ಅಲ್ಲೇ ಮೌನವಾದೆ.
ಆದರೆ ಅವರು ನಾನು ಆರ್ಡರ್ ಮಾಡಿದ ಆಹಾರವನ್ನು ಕೈಯಲ್ಲಿ ಹಿಡಿದು ಅದೇ ಶಾಂತ ಚಿತ್ತದಿಂದ ಮುಖದಲ್ಲಿ ನಗು ತುಂಬಿ ಆಹಾರ ಪೊಟ್ಟಣವನ್ನು ನನ್ನತ್ತ ನೀಡಿದರು. 40ರ ಪ್ರಾಯದ ಮಧ್ಯ ವಯಸ್ಕರಾದ ಅವರ ತಲೆಕೂದಲು ಅಲ್ಲಲ್ಲಿ ಬಿಳಿಯಾಗಿದ್ದವು. ಊರುಗೋಲುಗಳ ಸಹಾಯದಿಂದ ನೇರವಾಗಿ ನಿಲ್ಲಲು ಪ್ರಯತ್ನಿಸುತ್ತಿದ್ದರು. ಮತ್ತು ನನ್ನತ್ತ ನಗು ಬೀರಿದರು. ಅವರ ಸ್ಥಿತಿಯನ್ನು ಕಂಡು ನಾನು ಕ್ಷಣಕಾಲ ದಂಗಾಗಿದ್ದೆ. ಎಲ್ಲವೂ ಸರಿ ಇರುವ ನಾನು ತಮ್ಮ ಜೀವನಕ್ಕಾಗಿ ಶ್ರಮ ವಹಿಸಿ ದುಡಿಯುವ ಇವರ ಮೇಲೆ ಕೋಪಗೊಂಡಿದ್ದಕ್ಕೆ ನನ್ನನ್ನೇ ನಾನು ಶಪಿಸಿಕೊಂಡೆ. ಕೂಡಲೇ ಕ್ಷಮೆಯಾಚಿಸಿ ಅವರಲ್ಲಿ ನಾನು ಮಾತುಕತೆ ನಡೆಸಲು ಮುಂದಾದೆ.
ಅವರ ಹೆಸರು ಕೃಷ್ಣಪ್ಪ ರಾಥೋಡ್, ಕೆಫೆಯಲ್ಲಿ ಕೆಲಸ ಮಾಡುತ್ತಿದ್ದ ಅವರು ಕೋವಿಡ್ ಸಮಯದಲ್ಲಿ ಕೆಲಸ ಕಳೆದುಕೊಂಡರಂತೆ, ಅಂದಿನಿಂದ ತನ್ನ ಕುಟುಂಬವನ್ನು ಹೊರೆಯಲು ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದಾರೆ. ಮೂವರು ಮಕ್ಕಳಿದ್ದು, ಆರ್ಥಿಕ ಸಂಕಷ್ಟದಿಂದಾಗಿ ಅವರೆಲ್ಲರನ್ನೂ ಬೆಂಗಳೂರಿಗೆ ಕರೆತರಲು ಸಾಧ್ಯವಾಗಿಲ್ಲ. ಮುಂಜಾನೆ ಏಳುವುದರಿಂದ ಹಿಡಿದು ಇಡೀ ದಿನ ದಣಿವರಿವಿಲ್ಲದೇ ಕೆಲಸ ಮಾಡುತ್ತಾ ಎಲ್ಲಾ ಕಷ್ಟಗಳನ್ನು ಎದುರಿಸುವ ಶಕ್ತಿ ಅವರಲ್ಲಿದೆ.
ನಾವು ಸುಮಾರು 2-3 ನಿಮಿಷಗಳ ಕಾಲ ಮಾತನಾಡಿದೆವು. ಅಷ್ಟರಲ್ಲಿ ಅವರು ಸರ್ ನನ್ನ ಮುಂದಿನ ವಿತರಣೆಗೆ ತಡವಾಗುತ್ತಿದೆ ಎಂದು ಕೃಷ್ಣಪ್ಪ ಅಲ್ಲಿಂದ ಹೊರಟು ಹೋದರು. ನನಗೆ ಉತ್ತರಿಸಲು ನಿಜವಾಗಿಯೂ ಕಷ್ಟಕರವಾದ ಹಲವು ಪ್ರಶ್ನೆಗಳನ್ನು ಬಿಟ್ಟು ಹೋದರು ಎಂದು
The post ಜೀವನ ಕಷ್ಟ ಅನ್ನೋರು ಈ ಸ್ಟೋರಿ ಓದಿ …!!!!! appeared first on Valmiki Mithra.
]]>The post ಕೋವಿಡ್ 19 ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಹಿನ್ನೆಲೆ ಹೊಸ ಮಾರ್ಗಸೂಚಿ ರಿಲೀಸ್ appeared first on Valmiki Mithra.
]]>ವಸತಿ ಸಮುಚ್ಛಯ, ಶಾಲೆ , ಅಪಾರ್ಟ್ ಮೆಂಟ್ ಗಳ ಮಾರ್ಗಸೂಚಿಗಳು, ಜೂನ್ 10ರ ನಂತರ ಕೋವಿಡ್ 19 ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಮಾರ್ಗಸೂಚಿಯನ್ನು ನವೀಕರಿಸಲಾಗಿದೆ. ಲಸಿಕೆ ಪಡೆಯರಿ ಹಾಗೂ ಕೋವಿಡ್ ನಿಯಂತ್ರಣ ಪಾಲಿಸಿ
The post ಕೋವಿಡ್ 19 ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಹಿನ್ನೆಲೆ ಹೊಸ ಮಾರ್ಗಸೂಚಿ ರಿಲೀಸ್ appeared first on Valmiki Mithra.
]]>The post ಪಿತೂರಿ ನಡೆಸಿ ನನ್ನ ವರ್ಗಾವಣೆ ಮಾಡಲಾಗಿದೆ, ಹೀಗಾಗಿ ನನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದೇನೆ – ಪೊಲೀಸ್ ಮಹಾನಿರ್ದೇಶಕ ಡಾ.ಪಿ ರವೀಂದ್ರನಾಥ್ appeared first on Valmiki Mithra.
]]>ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಉದ್ಯೋಗ ಪಡೆದ ಪ್ರಕರಣ ವಿಚಾರಣೆ ನಡೆಸುತ್ತಿದ್ದೆ. ಆ ವೇಳೆ ಪತ್ರಿಕಾಗೋಷ್ಟಿಯೊಂದರಲ್ಲಿ ಇಬ್ಬರ ಪ್ರಭಾವಿಗಳ ಹೆಸರು ಬಹಿರಂಗಪಡಿಸಿದ್ದಲ್ಲದೆ ಅವರು ಡಿಸಿಆರ್ಇ ಅಧಿಕಾರಿಗಳ ಮುಂದೆ ವಿಚಾರಣೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದ್ದೆ. ಅಂದಿನಿಂದ ಸರ್ಕಾರದ ಮೇಲೆ ಪ್ರಭಾವ ಬೀರುವ ವ್ಯಕ್ತಿಗಳು ನನ್ನನ್ನ ಟಾರ್ಗೆಟ್ ಮಾಡುತ್ತಿದ್ದಾರೆ” ಎಂದು ಡಾ.ಪಿ ರವೀಂದ್ರನಾಥ್ ಆರೋಪಿಸಿದ್ದಾರೆ.
ನಿಜವಾದ ಎಸ್ಎಸಿ/ಎಸ್ಟಿ ಸಮುದಾಯದಕ್ಕೆ ನ್ಯಾಯ ದೊರಕಿಸಿಕೊಡಲು ನಾನು ಮತ್ತಷ್ಟು ಕಾಲ ಡಿಸಿಆರ್ಇ ನಲ್ಲಿ ಇರಬೇಕಿತ್ತು. ನಾನು ಸರ್ಕಾರದ ವಿರುದ್ಧವಿರಲಿಲ್ಲ. ನನ್ನನ್ನು ವರ್ಗಾವಣೆ ಮಾಡಿ ಎಂದು ಕೇಳಿಕೊಂಡಿರಲಿಲ್ಲ. ಈ ವರ್ಗಾವನೆ ಸಾರ್ವಜನಿಕ ಹಿತದೃಷ್ಟಿಯಿಂದ ನಡೆದುದ್ದಲ್ಲ. ಬದಲಿಗೆ ನಿಯಮಾವಳಿಗಳನ್ನು ಉಲ್ಲಂಘಿಸಿ, ಪಿತೂರಿ ನಡೆಸಿ ನನ್ನ ವರ್ಗಾವಣೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಕೆಲದಿನಗಳಿಂದ ರಜೆಯಲ್ಲಿದ್ದ ಅವರು, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ (ಡಿಸಿಆರ್ಇ) ಹೆಚ್ಚುವರಿ ಡಿಜಿಪಿ ಅರುಣ್ ಚಕ್ರವರ್ತಿಯವರಿಗೆ ಅಧಿಕಾರ ಹಸ್ತಾಂತರಿಸಿದ ನಂತರ ಇಂದು ಅರಮನೆ ರಸ್ತೆಯ ಅವರ ಕಚೇರಿಯಿಂದ ವಿಧಾನಸೌಧಕ್ಕೆ ತೆರಳಿ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ..
The post ಪಿತೂರಿ ನಡೆಸಿ ನನ್ನ ವರ್ಗಾವಣೆ ಮಾಡಲಾಗಿದೆ, ಹೀಗಾಗಿ ನನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದೇನೆ – ಪೊಲೀಸ್ ಮಹಾನಿರ್ದೇಶಕ ಡಾ.ಪಿ ರವೀಂದ್ರನಾಥ್ appeared first on Valmiki Mithra.
]]>The post ಮಸಾಲಾ ಕಂಪನಿಯ ಹೊಸ ಉತ್ಪನ್ನಗಳನ್ನು ವಿಡುಗಡೆ ಮಾಡಿದ ಬಸವರಾಜ ಬೊಮ್ಮಾಯಿ appeared first on Valmiki Mithra.
]]>ಇನ್ನೂ ಈ ಸಂದರ್ಭದಲ್ಲಿ ಸಚಿವರಾದ ಡಾ. ಸಿ.ಎನ್ ಸಿ. ಎನ್. ಅಶ್ವತ್ ನಾರಾಯಣ್, ಕೆ. ಗೋಪಾಲಯ್ಯ, ಶಾಸಕರಾದ ಮಸಾಲೆ ಜಯರಾಮ, ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ, ಮಾಜಿ ಶಾಸಕರಾದ ನರೇಂದ್ರ ಬಾಬು ಮತ್ತು ಇತರರು ಉಪಸ್ಥಿತರಿದ್ದರು.
The post ಮಸಾಲಾ ಕಂಪನಿಯ ಹೊಸ ಉತ್ಪನ್ನಗಳನ್ನು ವಿಡುಗಡೆ ಮಾಡಿದ ಬಸವರಾಜ ಬೊಮ್ಮಾಯಿ appeared first on Valmiki Mithra.
]]>The post ವಿದ್ಯುತ್ ಗುತ್ತಿಗೆದಾರರ ಸಂಘದ ಕಾರ್ಯಕಾರಿ ಸಮಿತಿಯ ಚುನಾವಣೆಗೆ ಡೇಟ್ ಫಿಕ್ಸ್? appeared first on Valmiki Mithra.
]]>ಕೋವಿಡ್ ನಿರ್ಬಂಧ ನೆಪ ಹೇಳಿಕೊಂಡು ಇಲ್ಲಿವರೆಗೆ ಚುನಾವಣೆಯನ್ನು ಮುಂದೂಡಿಕೊಂಡು ಬರಲಾಗಿತ್ತು. ಆದರೆ, ಚುನಾವಣೆ ನಡೆಸಲೇಬೇಕೆಂದು ಗುತ್ತಿಗೆದಾರರು ಪಟ್ಟು ಹಿಡಿದಿದ್ದರು. ಕೊನೆಗೂ ಪಟ್ಟು ಸಡಿಲಿಸಿರುವ ಸರ್ಕಾರ ಚುನಾವಣೆಗೆ ಅನುಮತಿ ನೀಡಿದೆ.
ದಿನಾಂಕ 12-06-2022 ರಂದು ವಿದ್ಯುತ್ ಗುತ್ತಿಗೆದಾರರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಚುನಾವಣೆ ನಡೆಯಲಿದ್ದು, ಚುನಾವಣೆ ಪ್ರಕ್ರಿಯೆಯ ಸಂಪೂರ್ಣ ಈ ಕೆಳಕಂಡಂತಿದೆ
The post ವಿದ್ಯುತ್ ಗುತ್ತಿಗೆದಾರರ ಸಂಘದ ಕಾರ್ಯಕಾರಿ ಸಮಿತಿಯ ಚುನಾವಣೆಗೆ ಡೇಟ್ ಫಿಕ್ಸ್? appeared first on Valmiki Mithra.
]]>The post ಮಾನವ ಹಕ್ಕುಗಳ ಬಗ್ಗೆ ಜನಸಾಮಾನ್ಯರಿಗೆ ಹೆಚ್ಚಿನ ಶಿಕ್ಷಣಕ್ಕೆ ಒತ್ತು ನೀಡುವುದರ ಮೂಲಕ ಬಲಪಡಿಸೋಣ – ಸಿ.ಡಿ ಕಿರಣ್ ರಾಜ್ಯಾಧ್ಯಕ್ಷರು appeared first on Valmiki Mithra.
]]>The post ಮಾನವ ಹಕ್ಕುಗಳ ಬಗ್ಗೆ ಜನಸಾಮಾನ್ಯರಿಗೆ ಹೆಚ್ಚಿನ ಶಿಕ್ಷಣಕ್ಕೆ ಒತ್ತು ನೀಡುವುದರ ಮೂಲಕ ಬಲಪಡಿಸೋಣ – ಸಿ.ಡಿ ಕಿರಣ್ ರಾಜ್ಯಾಧ್ಯಕ್ಷರು appeared first on Valmiki Mithra.
]]>The post ರಾಜ್ಯ ಸರಕಾರ ಎಚ್ಚೆತ್ತುಕೊಂಡು ಮೀಸಲಾತಿ ಕೊಡಬೇಕು, ಇಲ್ಲದಿದ್ದರೆ ರಾಜ್ಯಾದ್ಯಂತ ನಾಯಕ ಜನಾಂಗದ. ಯುವಕರು .ಉಗ್ರ ಹೋರಾಟ ಮಾಡುತ್ತಾರೆ – ಕಾಂಗ್ರೆಸ್ ಪಕ್ಷದ ಮುಖಂಡರಾದ ಶ್ರೀ ರಾಜು ನಾಯಕ appeared first on Valmiki Mithra.
]]>ಧರಣಿ ಸತ್ಯಾಗ್ರಹದಲ್ಲಿ ಶ್ರೀ ವಾಲ್ಮೀಕಿ ಸ್ವಾಮೀಜಿ ಹೋರಾಟಕ್ಕೆ ಬೆಂಬಲಿಸಿ ಫ್ರೀಡಂ ಪಾರ್ಕ್. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸತತ 14 ದಿನಗಳಿಂದ ನಮ್ಮ ಪೂಜ್ಯ ಗುರುಗಳು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ . ಸತತ 14ದಿನಗಳಿಂದ ಪೂಜ್ಯ ಗುರುಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಕೂಡಲೇ ರಾಜ್ಯ ಸರಕಾರ ಎಚ್ಚೆತ್ತುಕೊಂಡು ಮೀಸಲಾತಿ ಕೊಡಬೇಕು .ಇಲ್ಲದಿದ್ದರೆ ರಾಜ್ಯಾದ್ಯಂತ ನಾಯಕ ಜನಾಂಗದ. ಯುವಕರು .ಉಗ್ರ ಹೋರಾಟ ಮಾಡುತ್ತಾರೆ ಎಂದು ಎಚ್ಚರಿಸಿದರು.
ಕುಷ್ಟಗಿ ನಾಯಕ ಸಮಾಜದ ಮುಖಂಡರುರಾದ ರಮೇಶ್ ಕೊನ್ ಸಾಗರ್ .ಆಗೋಲಿ ಗ್ರಾಮದ ನಾಯಕ ಸಮಾಜದ .ಮುಖಂಡರುಗಳು. ಶರಣಪ್ಪ ಕನಕಪ್ಪ ಮಹೇಶ್ ರವಿ ಇನ್ನಿತರ ಮುಖಂಡರುಗಳು ಭಾಗವಹಿಸಿ ಗುರುಗಳಿಗೆ ಬೆಂಬಲ ಸೂಚಿಸಿದರು.
The post ರಾಜ್ಯ ಸರಕಾರ ಎಚ್ಚೆತ್ತುಕೊಂಡು ಮೀಸಲಾತಿ ಕೊಡಬೇಕು, ಇಲ್ಲದಿದ್ದರೆ ರಾಜ್ಯಾದ್ಯಂತ ನಾಯಕ ಜನಾಂಗದ. ಯುವಕರು .ಉಗ್ರ ಹೋರಾಟ ಮಾಡುತ್ತಾರೆ – ಕಾಂಗ್ರೆಸ್ ಪಕ್ಷದ ಮುಖಂಡರಾದ ಶ್ರೀ ರಾಜು ನಾಯಕ appeared first on Valmiki Mithra.
]]>