ರಾಯಚೂರಿನಲ್ಲಿ ಅದ್ಧೂರಿಯಾಗಿ ಕುಮಾರ ರಾಮನ ಜಯಂತಿ ಆಚರಣೆ

ಮಸ್ಕಿ: ವಾಲ್ಮೀಕಿ ನಾಯಕ ಸಮಾಜಕ್ಕೆ ಏನಾದರೂ ನ್ಯಾಯ ಸಿಗಬೇಕಾದರೆ ಅದು ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ, ನಾಯಕ ಸಮಾಜದ ಬಹುದಿನದ ಬೇಡಿಕೆಯದ 7.5 ಮೀಸಲಾತಿ ಬೇಡಿಕೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶೀಘ್ರ ಈಡೇರಿಸಲಿದ್ದಾರೆ ಎಂದು ಸುರಪುರದ ಶಾಸಕ ರಾಜುಗೌಡ ಹೇಳಿದರು.

ಕುಮಾರ ಗಂಡುಗಲಿ ಕುಮಾರರಾಮನ ಸಮಾಧಿ ಇರುವ ತಾಲೂಕಿನ ತಲೇಖಾನ ಗ್ರಾಮದಲ್ಲಿ ಗುರುವಾರ ಕುಮಾರ ರಾಮನ ಜಯಂತಿ ಉದ್ಘಾಟಿಸಿ ಮಾತನಾಡಿದವರು, ನಾಯಕ ಸಮಾಜದ ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಮುಂದೆ ಬಂದಾಗ ಮಾತ್ರ ಸೂಕ್ತ ರಾಜಕೀಯ ಸ್ಥಾನಮಾನಗಳು ದೊರೆಯಲು ಸಾಧ್ಯ ಎಂದರು.

ಶಾಸಕ ಆರ್ ಬಸನಗೌಡ ತುರುವಿಹಾಳ ಮಾತನಾಡಿ ಗಂಡುಗಲಿ ಕುಮಾರರಾಮ ಒಬ್ಬ ಶೂರನಾಗಿದ್ದ ಇಂದಿನ ಯುವ ಜನಾಂಗ ಆತನಂತೆ ಶೂರರು ಆಗಿರಬೇಕು ಎಂದರು.ಮಾಜಿ ಶಾಸಕರ ಪುತ್ರ ಪ್ರಸನ್ನ ಪಾಟೀಲ್ ಮಾತನಾಡಿದರು.ಆತ್ಮನಂದ ಸ್ವಾಮೀಜಿ,ರಾಜಜಾ ಸೋಮನಾಥ ನಾಯಕ,ಆರ್ ಸಿದ್ದನಗೌಡ ತುರ್ವಿಹಾಳ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಣ್ಣನಾಯಕ, ಕುಮಾರರಾಮ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ರಾಜೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಮೌನೇಶ ರಾಠೋಡ, ಸೇರಿದಂತೆ ಗ್ರಾಮದ ಮುಖಂಡರು ಇದ್ದರು.

ಇದಕ್ಕೂ ಮೊದಲು ಪ್ರಮುಖ ಬೀದಿಗಳಲ್ಲಿ ಕುಮಾರ ರಾಮನ ಭಾವಚಿತ್ರದ ಮೆರವಣಿಗೆ ನಡೆಯಿತು.ವಿವಿಧ ಕಲಾತಂಡಗಳು ಪಾಲ್ಗೊಂಡಿದ್ದವು

Discover more from Valmiki Mithra

Subscribe now to keep reading and get access to the full archive.

Continue reading