ಸುರಪುರ: ಪ್ರತಿ ವರ್ಷದಂತೆ ಈ ವರ್ಷ ಕೂಡ ಆಗಸ್ಟ್ 11 ರಂದು ನಾಡಿನಾದ್ಯಂತ ನಡೆಯಲಿರುವ ವಿಜಯನಗರ ಸಾಮ್ರಾಜ್ಯದ ಮೂಲ ಪ್ರೇರಣೆಯಾಗಿದ್ದ ಕಂಪಿಲಿ ಸಾಮ್ರಾಜ್ಯದ ಮಹಾರಾಜ ಶ್ರೀ ಗಂಡುಗಲಿ ಕುಮಾರರಾಮ ಅವರ ಜಯಂತೋತ್ಸವ ಕಾರ್ಯಕ್ರಮಕ್ಕೆ ಎಲ್ಲರೂ ಭಾಗವಾಹಿಸಿ ಎಂದು ಶಾಸಕ ರಾಜೂಗೌಡ ಮನವಿ ಮಾಡಿದ್ದಾರೆ.
ಈ ಕಾರ್ಯಕ್ರಮವು ಮಸ್ಕಿ ತಾಲೂಕಿನ ತಲೆಖಾನದಲ್ಲಿ ನಡೆಯಲಿದೆ ಮತ್ತು ಈ ಗಂಡುಗಲಿ ಕುಮಾರರಾಮ ಜಯಂತೋತ್ಸವದಲ್ಲಿ ನಾನು ಕೂಡ ಭಾಗವಹಿಸುತ್ತಿದ್ದೇನೆ ನೀವು ಕೂಡ ಬನ್ನಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ರಾಜೂಗೌಡ ವಿಡಿಯೋ ಮಾಡಿ ಜನರಿಗೆ ಸಂದೇಶ ರವಾನಿಸಿದರು