ಬೆಂಗಳೂರು: ನಮ್ಮ ಉದ್ದೇಶ ಈ ರಾಜ್ಯಕ್ಕೆ ನ್ಯಾಯ ಒದಗಿಸಬೇಕು. ಕಾಂಗ್ರೆಸ್ ಶಕ್ತಿಯೇ ಈ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸವೇ ಈ ದೇಶದ ಇತಿಹಾಸ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಸಿದ್ದರಾಮಯ್ಯನವರ ಅಧಿಕಾರ ನಾವು ನೋಡಿದ್ದೇವೆ. ಸಿದ್ದರಾಮಯ್ಯ ಬಸವ ಜಯಂತಿಯ ದಿನ ಅಧಿಕಾರಕ್ಕೆ ಬಂದರು. ಬಸವಣ್ಣನವರ ತತ್ವವೇ ಕಾಂಗ್ರೆಸ್ ಪಕ್ಷದ ತತ್ವ. ಇದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ನಿಮ್ಮ ಆಸೆ ನೀವೆಲ್ಲಾ ವಿಧಾನ ಸೌಧದ ಮೂರನೇ ಮೆಟ್ಟಿಲಿನ ಮೇಲೆ ನಡೆದುಕೊಂಡು ಓಡಾಡಬೇಕು. ಅದಕ್ಕೆ ನಾವು ನೀವು ಈ ಭ್ರಷ್ಟ ಸರ್ಕಾರವನ್ನು ತೆಗೆದುಹಾಕಲು ಇಂದು ಸಂಕಲ್ಪ ಮಾಡಬೇಕು ಎಂದರು.
ಇಂದು ನಾವು ನೀವೆಲ್ಲಾ ಬಹಳ ಪುಣ್ಯವಂತರು. ಈ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಆಗಿದೆ ಎಂದು ತಿಳಿಸಿದರು.