ಬೆಂಗಳೂರು: ಅಜಾನ್, ಹನುಮಾನ್ ಚಾಲೀಸಾ ವಿವಾದದ ಕುರಿತು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ನಮ್ಮ ಪಕ್ಷದ ಅಲ್ಪಸಂಖ್ಯಾತರ ನಿಯೋಗ ಸಿಎಂ ಭೇಟಿ ಮಾಡಿದೆ. ಬೇಕೆಂದೇ ಕೆಣಕಿಕೊಂಡು ಜಗಳಕ್ಕೆ ಬರುತ್ತಿದ್ದಾರೆ. ಇದು ಸರ್ಕಾರದ ಜವಬ್ದಾರಿ. ಈ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಗೃಹಸಚಿವರು ಜವಾಬ್ದಾರಿ ವಹಿಸಬೇಕು. ಅವರು ಶಾಂತಿಯನ್ನ ಕಾಪಾಡಬೇಕು. ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ನಳೀನ್ ಕುಮಾರ್ ಕಟೀಲ್ ಅವರ ಮಕ್ಕಳಿಗೆ ಮಸಿ ಬಳಿದುಕೊಂಡು ಕೂರಲಿ. ಅವರಿಗೆ ಮುಖ ತೋರಿಸೋಕೆ ಆಗ್ತಿಲ್ಲ. ಜನ ಉಗಿಯುತ್ತಿದ್ದಾರೆ. ಅವರ ಮುಖ ಮೊದಲು ತೊಳೆದುಕೊಳ್ಳಲಿ. ನಮ್ಮದೇನು ಹೇಳ್ತಾರೆ, ಅವರ ಮನೆ ಸರಿಮಾಡಿಕೊಳ್ಳಲಿ. ಕ್ಯಾಬಿನೆಟ್ ಡ್ರಾಪ್, ಆ ಡ್ರಾಪ್, ಈ ಡ್ರಾಪ್ ಎಲ್ಲಾ ಆಗ್ತಿದೆಯಲ್ಲ ಅದನ್ನ ಮೊದಲು ನೋಡಿಕೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದರು.