ವಿಜಯಪುರದಲ್ಲಿ ಕಳೆದ ರಾತ್ರಿ ಸುರಿದ ಮಳೆಯಿಂದ ಸಂಭವಿಸಿದ ಅವಘಡದಲ್ಲಿ ಬಾಲಕ ಸಚಿನ್ ಮಹಾಂತೇಶ ಸೊನ್ನದ ಸಾವು

ವಿಜಯಪುರ:  ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ  ಸಂಭವಿಸಿದ ಅವಘಡದಲ್ಲಿ ಬಾಲಕ ಸಚಿನ್​​ ಮಹಾಂತೇಶ ಸೊನ್ನದ (14)  ಸಾವನ್ನಪ್ಪಿರುವ ಘಟನೆ ವಿಜಯಪುರ ಹೊರ ವಲಯದ ಹೌಸಿಂಗ್ ಬೋರ್ಡ್ ಬಳಿ ನಡೆದಿದೆ.

ಕಳೆದ ರಾತ್ರಿ ವಿಜಯಪುರ ಹೊರ ವಲಯದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಹೌಸಿಂಗ್ ಬೋರ್ಡ್ ಬಳಿಯಿದ್ದ ತೋಟದ ಮನೆಯ ಮೇಲ್ಛಾವಣಿ​ ಹಾರಿ ಹೋಗಿದ್ದು, ತಗಡಿನ ಶೀಟ್ ಮೇಲಿದ್ದ ಕಲ್ಲು ಉರುಳಿ  ಬಾಲಕನ ಮೇಲೆ ಬಿದ್ದಿದ್ದೆ. ಘಟನೆಯಲ್ಲಿ ಸಚಿನ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ವಿಜಯಪುರ ಗ್ರಾಮೀಣ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Discover more from Valmiki Mithra

Subscribe now to keep reading and get access to the full archive.

Continue reading