ದುಗ್ಗಮ್ಮ ದೇವಿ ಜಾತ್ರೆ ಹಿನ್ನೆಲೆ: ಜಿಲ್ಲಾಡಳಿತದ ಆದೇಶ ಮೀರಿ ಪ್ರಾಣಿವಧೆ ಮಾಡಿದ ಯುವಕರು

ದಾವಣಗೆರೆಯಲ್ಲಿ ದುಗ್ಗಮ್ಮ ದೇವಿ ಜಾತ್ರೆ ಆರಂಭವಾಗಿದ್ದು, ಜಿಲ್ಲಾಡಳಿತದ ಆದೇಶವನ್ನು ಗಾಳಿಗೆ ತೂರಿ ಜಾತ್ರೆಯಲ್ಲಿ ಕೆಲ ಯುವಕರು ಪ್ರಾಣಿವಧೆ ಮಾಡಿದ್ದಾರೆ.ದಾವಣಗೆರೆ: ನಗರದಲ್ಲಿ ದುಗ್ಗಮ್ಮ ದೇವಿ ಜಾತ್ರೆ ಸಂಭ್ರಮ ಮನೆ ಮಾಡಿದ್ದು, ಆಚರಣೆಯಲ್ಲಿ ಪ್ರಾಣಿ ಬಲಿ ಕೊಡಬಾರದು ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ‌ ಹೊರಡಿಸಿತ್ತು.‌ ಆದರೆ ನಿಯಮವನ್ನು ಗಾಳಿಗೆ ತೂರಿ ಕೆಲ ಯುವಕರು ಕೋಣವನ್ನು ಬಲಿ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಪ್ರತಿವರ್ಷದಂತೆ ಈ ಬಾರಿಯೂ ದುಗ್ಗಮ್ಮ ದೇವಿ ಜಾತ್ರೆ ಆರಂಭವಾಗಿದೆ. ಈ ಜಾತ್ರಾ ಮಹೋತ್ಸವದಲ್ಲಿ ಭಕ್ತರು ಕೋಣ ಬಲಿ ಕೊಡುವ ಸಂಪ್ರದಾಯವನ್ನು ನಡೆಸಿಕೊಂಡು ಬಂದಿದ್ದಾರೆ. ಆದರೆ ಜಿಲ್ಲಾಡಳಿತ ದೇಗುಲ 500 ಮೀಟರ್ ವ್ಯಾಪ್ತಿಯಲ್ಲಿ ಪ್ರಾಣಿವಧೆ ಮಾಡಬಾದರು. ಬದಲಿಗೆ ಕೋಣದ ರಕ್ತವನ್ನು ಸಿರಿಂಜ್ನಲ್ಲಿ ತಗೆದು ಪೂಜೆ ಮಾಡಬೇಕೆಂದು ಭಕ್ತರಿಗೆ ತಿಳಿಸಿತ್ತು.
ಜಿಲ್ಲಾಡಳಿತದ ಆದೇಶ ಮೀರಿ ಪ್ರಾಣಿವಧೆ ಮಾಡಿದ ಯುವಕರುಅಷ್ಟೇ ಅಲ್ಲದೆ ಪ್ರಾಣವಧೆ ಆಗುವುದನ್ನು ತಡೆಯುವ ಸಲುವಾಗಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಎಸ್ಪಿ ಸಿಬಿ ರಿಷ್ಯಂತ್ ಅವರು ಕಟ್ಟೆಚ್ಚರ ವಹಿಸಿ ರಾತ್ರಿಯಿಡಿ ದೇವಸ್ಥಾನದ ಮುಂಭಾಗವೇ ಠಿಕಾಣಿ ಹೂಡಿದ್ದರು. ಆದರೂ ಅಧಿಕಾರಿಗಳ ಕಣ್ಣು ತಪ್ಪಿಸಿ ಭಕ್ತರು, ದೇವಾಲಯದಿಂದ 500 ಮೀಟರ್ ವ್ಯಾಪ್ತಿಯಲ್ಲಿ ಕೆಲ ಯುವಕರು ಕೋಣವನ್ನು ಬಲಿ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Discover more from Valmiki Mithra

Subscribe now to keep reading and get access to the full archive.

Continue reading