ವಿಜಯಪುರ: ರಾಜ್ಯದಲ್ಲಿ ನಾಯಕ,ವಾಲ್ಮೀಕಿ ಜನಾಂಗದ ಉಪ ಪಂಗಡಗಳಾದ ಪರಿವಾರ ಮತ್ತು ತಳವಾರ ಜಾತಿಗಳಿಗೆ ಪರಶಿಷ್ಠ ವರ್ಗದ ಪ್ರಮಾಣಪತ್ರ ನೀಡುವು ದನ್ನು ಹೊರತು ಪಡಿಸಿ ಅನ್ಯ ಹಿಂದುಳಿದ ವರ್ಗದಲ್ಲಿ ಬರುವ ತಳವಾರ ಪರಿವಾರ ಜಾತಿಗಳಿಗೆ ಎಸ್.ಟಿ ಪ್ರಮಾಣಪತ್ರ ನೀಡಬಾರದೆಂದು ವಾಲ್ಮೀಕಿ ಮಾಹಾಸಭಾ ವಿಜಯಪುರ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳ ಮುಕಾಂತರ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸದರು.
ನಂತರ ವಾಲ್ಮೀಕಿ ಮಾಹಾಸಭಾದ ಜಿಲ್ಲಾಧ್ಯಕ್ಷ ರವಿ ಬಿಸನಾಳ ಮಾತನಾಡಿ ನಾಯಕ ಸಮುದಾಯದ ಪರ್ಯಾಯ ಪದಗಳಾದ ಪರಿವಾರ ಮತ್ತು ತಳವಾರ ನಾಯಕ ಸಮಾಜದ ಕ್ರಮಸಂಖ್ಯೆ 38ರಲ್ಲಿ ಬರುತ್ತವೆ. ಮತ್ತು ಹಿಂದುಳಿದ ಪ್ರವರ್ಗ 1ರಲ್ಲಿಯೂ ತಳವಾರ ಪರಿವಾರ ಸಮುದಾಯ ಬರುತ್ತವೆ ಈ ಜಾತಿಗಳಿಗೆ ಪರಶಿಷ್ಠ ಪಂಗಡ ಪ್ರಮಾಣ ನೀಡದೆ ಕ್ರನಸಂಖ್ಯೆ 38ರಲ್ಲಿ ಬರತಕಂತ ಪರಿವಾರ ತಳವಾರ ಜಾತಿಗೆ ST ಪ್ರಮಾಣ ಪತ್ರ ನೀಡಬೇಕು ಒಂದು ವೇಳೆ ಇತರೆ ಜಾತಿಯ ತಳವಾರ ದವರಿಗೆ ರಾಜಕೀಯ ಒತ್ತಡಕ್ಕೆ ಮಣಿದು ಪ್ರಮಾಣ ಪತ್ರ ನೀಡಿದರೆ ಅಂತಹ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಪ್ರಕರಣ ದ ಖಲಿಸಲಾಗುವದು ಎಂದರು. ಸಂದರ್ಭದಲ್ಲಿ ಜಿಲ್ಲಾ ಮುಖಂಡರು ಉಪಸ್ಥಿತರಿದರು.