ಉತ್ತರ ಪ್ರದೇಶದ ಮೀರತ್ನ ಕಿಥೌರ್ನಲ್ಲಿ ಚುನಾವಣ ಪ್ರಚಾರ ಮುಗಿಸಿ ದೆಹಲಿಗೆ ಹೊರಟಿದ್ದ ವೇಳೆ ಘಟನೆ ನಡೆದಿದೆ. ಛಗರ್ಸಿ ಟೋಲ್ ಪ್ಲಾಜಾ ಬಳಿ ನಡೆದ ಘಟನೆ. ವಾಹನದ ಮೇಲೆ ದುಷ್ಕರ್ಮಿಗಳು 3-4 ಸುತ್ತು ಗುಂಡು ಹಾರಿಸಿದ್ದಾರೆ .
ಈ ಕುರಿತು ಪ್ರತಿಕ್ರಿಯಿಸಿರುವ ಅಸಾದುದ್ದೀನ್ “3-4 ಜನರಿದ್ದ ತಂಡವು ಏಕಾಏಕಿ ನನ್ನ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ನಾನು ಬೇರೆ ಕಾರಿನಲ್ಲಿ ಅಲ್ಲಿಂದ ಹೊರಟೆ” ಎಂದು ಹೇಳಿದ್ದಾರೆ.