ರಾಜ್ಯಮಟ್ಟದ ಸ್ವಾಮಿ ವಿವೇಕಾನಂದ ಪ್ರಶಸ್ತಿಗೆ ಭಾಜನರಾದ ಕೆಪಿಸಿಸಿ ಸದಸ್ಯ ಹನುಮನಹಳ್ಳಿಯ ಕುರಿ ಶಿವಮೂರ್ತಿ

ಬಿಜಾಪುರ: ಸಮಾಜ ಸೇವಕ ಹಾಗೂ ಕೆಪಿಸಿಸಿ ಸದಸ್ಯ ಹನುಮನಹಳ್ಳಿಯ ಕುರಿ ಶಿವಮೂರ್ತಿ ಅವರು ರಾಜ್ಯಮಟ್ಟದ ಸ್ವಾಮಿ ವಿವೇಕಾನಂದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕರ್ನಾಟಕ ರಾಜ್ಯ ಯುವ ಸಂಘಟನೆಗಳ ಒಕ್ಕೂಟ ಬೆಂಗಳೂರು ಇವರಿಂದ ಭಾನುವಾರ ಸಂಜೆ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ 158ನೇ ಜಯಂತೋತ್ಸವದ ಪ್ರಯುಕ್ತ ರಾಜ್ಯಮಟ್ಟದ ಸ್ವಾಮಿ ವಿವೇಕಾನಂದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನೆಹರೂ ಯುವ ಕೇಂದ್ರ ಬೆಂಗಳೂರು ರಾಜ್ಯ ನಿರ್ದೇಶಕ ಎಂ.ಎನ್ ನಟರಾಜ. ಎ ಎಸ್ ಪಾಟೀಲ, ಮಾಜಿ ಸಚಿವ ಸಿ. ಎಸ್ ನಾಡಗೌಡ, ಪ್ರಭುಗೌಡ ದೇಸಾಯಿ ಇದ್ದರು.ಚಿತ್ರದುರ್ಗ ಬಾಗಲಕೋಟೆಯ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು.

Discover more from Valmiki Mithra

Subscribe now to keep reading and get access to the full archive.

Continue reading