ಚಿತ್ರದುರ್ಗ: ಡಾ. ಬಿ ಎಲ್ ವೇಣು ಅವರ ದುರ್ಗದ ಬೇಡರ್ದಂಗೆ ಎಂಬ ಚಾರಿತ್ರಿಕ ಕಾದಂಬರಿ ಒಂದು ಬಿಡುಗಡೆಗೆ ಸಿದ್ಧವಾಗಿದೆ.1849 ರಲ್ಲಿ ಬ್ರಿಟಿಷರ ವಿರುದ್ಧ ನಡೆದ ಸಂಗ್ರಾಮ ಕುರಿತು ಬರೆಯಲಾಗಿದೆ.
ದಿನಾಂಕ 24 -೦1 2022 ನೇ ಸೋಮವಾರ , ಸಮಯ 11 ಗಂಟೆಗೆ ಚಿತ್ರದುರ್ಗದ ಐಶ್ವರ್ಯ ಫೋರ್ಟ್ , ಡಾ. ಬಿ ಎಲ್ ವೇಣು ವೃತ್ತದ ಬಳಿ ಕಾರ್ಯಕ್ರಮ ನಡೆಯಲಿದೆ.ಇನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರಿನ ಇತಿಹಾಸ ಸಂಶೋಧಕರು ಹಾಗೂ ಆಯುರ್ವೇದಿಕ್ ವೈದ್ಯರು ಆದ ಡಾ. ಬಿ ನಂಜುಂಡ ಸ್ವಾಮಿ ವಹಿಸಿಕೊಳ್ಳಲಿದ್ದಾರೆ. ಕೃತಿ ಬಿಡುಗಡೆಯನ್ನು ಬೆಂಗಳೂರಿನ ವಿಮರ್ಶಕರು ಸಾಹಿತಿ ಚಿಂತಕರು ಆದ ಡಾ. ಬಂಜಗೆರೆ ಜಯಪ್ರಕಾಶ್ ಬಿಡುಗಡೆಗೊಳಿಸಲಿದ್ದಾರೆ.
ಇನ್ನು ಮುಖ್ಯ ಅತಿಥಿಗಳಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಆದ ಶ್ರೀ ಎಂ ಸಿ ರಘು ಚಂದನ್ ಉಪಸ್ಥಿತರಿದ್ದಾರೆ. ಕೃತಿ ಕುರಿತು ವಿಮರ್ಶಕರು ಆದ ತುಮಕೂರಿನ ಸಾಹಿತಿಗಳು ಆದ ಡಾ. ಜಿ.ವಿ ಅನಂತಮೂರ್ತಿ ಕೂಡ ಆಗಮಿಸಲಿದ್ದಾರೆ. ಪ್ರಕಾಶಕರು ಗೀತಾಂಜಲಿ ಪುಸ್ತಕ ಪ್ರಕಾಶನ ಶಿವಮೊಗ್ಗ ಜಿಟಿಟಿ ಮೋಹನ್ ಕುಮಾರ್ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಮತ್ತು ಕೃತಿಕಾರರದ ಡಾ. ಬಿ ಎಲ್ ವೇಣು, ಸೃಷ್ಟಿ ಕಾರ ಪ್ರಕಾಶನ ಚಿತ್ರದುರ್ಗ ಮೇಘ ಗಂಗಾಧರ ನಾಯಕ್ ಕೂಡ ಆಗಮಿಸಲಿದ್ದಾರೆ. ಇನ್ನು ಕಾರ್ಯಕ್ರಮದ ನಿರೂಪಣೆಯನ್ನು ಡಾ. ಕರಿಯಪ್ಪ ಮಾಳಿಗೆ ಪ್ರಾಧ್ಯಪಕರು ನಡೆಸಿಕೊಡಲಿದ್ದಾರೆ. ಇನ್ನು ಸ್ವಾಗತವನ್ನು ಪತ್ರಕರ್ತರಾದ ಚಿಕ್ಕಪ್ಪನಹಳ್ಳಿ ಷಣ್ಮುಖ ನಡೆಸಿಕೊಡಲಿದ್ದಾರೆ. ಇನ್ನು ವಂದನಾರ್ಪಣೆ ಕಾರ್ಯಕ್ರಮವನ್ನು ಕೊನೆಯದಾಗಿ ಮದಕರಿನಾಯಕ ಸಾಂಸ್ಕೃತಿಕ ಕೇಂದ್ರ ಚಿತ್ರದುರ್ಗ ಡಿ ಗೋಪಾಲಸ್ವಾಮಿ ನಾಯಕ್ ನಡೆಸಿಕೊಡಲಿದ್ದಾರೆ.