ಸರ್ಕಾರಿ ಶಾಲೆಗಳನ್ನು ಉಳಿಸುವಂತೆ ಸೈಕಲ್ ಜಾಥಾ..!

ಗುಂಡ್ಲುಪೇಟೆ: ಸರ್ಕಾರಿ ಶಾಲೆಗಳನ್ನು ಉಳಿಸುವಂತೆ ತುಮಕೂರಿನ ರಾಹುಲ್ ಹಾಗೂ ಕೇರಳದ ಅರುಪ್ ಪಿ ರಾಜು ಎಂಬುವವರು ಸುಮಾರು 6000 ಕಿ ಮೀ ಗಳ ಸೈಕಲ್ ಜಾಥಾ ಹಮ್ಮಿಕೊಂಡಿದ್ದು ಇಂದು 6 ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದರು.

ಮುಂದಿನ ಜಿಲ್ಲೆಗೆ ತೆರಳುವ ಸಂಧರ್ಭದಲ್ಲಿ ಗುಂಡ್ಲುಪೇಟೆ ಯ ಜಯ ಕರ್ನಾಟಕ ಸಂಘಟನೆ ಹಾಗೂ ಅಂಬೇಡ್ಕರ್ ಸೇನೆ ಆತ್ಮೀಯವಾಗಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಈ ಇಬ್ಬರನ್ನು ಸನ್ಮಾನಿಸಿ ಮಾತನಾಡಿದ ಗೋವಿ ನಾಯಕ್ ರವರು, ಶಿಕ್ಷಣ ಪ್ರತಿಯೊಂದು ಮಗುವಿನ ಜನ್ಮಸಿದ್ದ ಹಕ್ಕು, ಇಂದು ಶಿಕ್ಷಣ ಒಂದು ವ್ಯಾಪಾರವಾಗಿ ಬದಲಾವಣೆಯಾಗಿದ್ದು ಬಡವರ ಕೈಗೆಡುಕದ ಸ್ಥಿತಿಗೆ ತಲುಪಿದೆ ಅಲ್ಲದೇ ಸರ್ಕಾರಿ ಶಾಲೆಗಳು ಹಲವೆಡೆ ಮುಚ್ಚುತ್ತಿರುವುದು ಆತಂಕಕ್ಕೀಡಾಗಿದೆ ಎಂದರು.

ಇಂತಹ ಸಂಧರ್ಭದಲ್ಲಿ ರಾಹುಲ್ ಹಾಗೂ ಅರುಣ್ ರವರು ಸರ್ಕಾರಿ ಶಾಲೆಗಳನ್ನು ಉಳಿಸುವುದಕ್ಕೆ ಅಭಿಯಾನ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ಅವರಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂಧರ್ಭದಲ್ಲಿ ತಾಲ್ಲೂಕು ಅಧ್ಯಕ್ಷರಾದ ಮಹೇಶ್ ಮಾಡ್ರಹಳ್ಳಿ, ಗೌರವಾಧ್ಯಕ್ಷರಾದ ಕ್ರೇಜಿ ನಾಗರಾಜ್, ಮಲ್ಲೇಶ್, ಸಾದಿಕ್ ಪಾಷ, ಚಂದ್ರು, ಲೋಕೇಶ್ ಹಾಗೂ ಅಂಬೇಡ್ಕರ್ ಸೇನೆಯ ತಾಲ್ಲೂಕು ಅಧ್ಯಕ್ಷರಾದ ದೀಪಕ್, ಯಶ್ವಂತ್, ಯುವ ಕಾಂಗ್ರೆಸ್ ಘಟಕದ ಜಿಲ್ಲಾ ಕಾರ್ಯದರ್ಶಿ ಸಾಹುಲ್ ಹಾಗೂ ಇತರರು ಹಾಜರಿದ್ದರು.

Discover more from Valmiki Mithra

Subscribe now to keep reading and get access to the full archive.

Continue reading