ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಉಳೆನೂರು ಗ್ರಾಮದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಸರ್ಕಾರದ ಆದೇಶದ ಪ್ರಕಾರ ಇಂದು ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಶ್ರೀ ಆಂಜನೇಯ ದೇವಸ್ಥಾನದ ಹತ್ತಿರ ಉದ್ಘಾಟನೆ ಯನ್ನು ದೀಪ ಹಚ್ಚುವುದರ ಮುಖಾಂತರ ನೆರವೇರಿತು , ಈ ಕಾರ್ಯಕ್ರಮದಲ್ಲಿ ಉಳೆನೂರು ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಕಾಸಿಂಸಾಬ್ ,ಪಿಡಿಒ ಮೈಬೂಬ್ ಸರ್ ಗ್ರಾಮ ಪಂಚಾಯತ್ ಎಲ್ಲಾ ಸದಸ್ಯರುಗಳು ಹನುಮಂತಪ್ಪ ಸಚಿವ , ದೇವರಾಜ , ಪರಸಪ್ಪಪಾಳೆ , ನೀಲೇಶಪ್ಪ , ಮಾರೆಪ್ಪ ಸಣ್ಣ ದೇವಣ್ಣ, ಅಲ್ಲಾಭಕ್ಷಿ ಹಾಗೂ ಸಿಬ್ಬಂದಿಗಳು , ಉಳೇನೂರು ಗ್ರಾಮದ ವಕೀಲರಾದ ರಾಘವೇಂದ್ರ ನಾಯಕ ವಕೀಲರು ,ಶರಣಪ್ಪ ವಕೀಲರುಹಾಗೂ ಆಶಾ ಕಾರ್ಯಕರ್ತರು ಸಾರ್ವಜನಿಕರು ಭಾಗವಹಿಸಿದ್ದರು .
ಈ ಕಾರ್ಯಕ್ರಮದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ, ಜೀತ ಪದ್ಧತಿ, ಮಹಿಳಾ ದೌರ್ಜನ್ಯ ಮುಕ್ತ, ಕೋವಿಡ್ ಲಸಿಕೆ ಅಭಿಯಾನ ಇತರೆ ವಿಷಯಗಳು ಸಮಾಜಿಕ ಪಿಡುಗುಗಳು ಬಗ್ಗೆ ಮಾಹಿತಿ . ಈ ಕಾರ್ಯಕ್ರಮದಲ್ಲಿ ವಿಷಯಗಳ ಬಗ್ಗೆ ರಾಘವೇಂದ್ರನಾಯಕ ವಕೀಲರಾದ ಸಾರ್ವಜನಿಕರಿಗೆ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದ ಬಗ್ಗೆಮಾತನಾಡಿದರು
ವರದಿ:
ಅಂಬಣ್ಣ ನಾಯಕ